Friday, 16 February 2018

ದೇವಾಡಿಗ ದೇವಾಡಿಗ ಸಂಘ ಮುಂಬೈ – ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ಅರಸಿನ ಕುಂಕುಮ ಕಾರ್ಯಕ್ರಮ .



ದೇವಾಡಿಗ ಸಂಘ ಮುಂಬೈಯ ಮಹಿಳಾ ವಿಭಾಗದ ವತಿಯಿಂದ  ಅರಸಿನ ಕುಂಕುಮ ಕಾರ್ಯಕ್ರಮವು ಜನವರಿ  26 ರಂದು ಅಪರಾಹ್ನ ದೇವಾಡಿಗ ಭವನ ನೆರೂಲ್ ನಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಆರ್ ಮೊಯಿಲಿ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜ್ರಂಬಣೆಯಿಂದ ಜರಗಿತು.



ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀಮತಿ ವನಿತಾ ರವಿ ದೇವಾಡಿಗ ಮತ್ತು ಶ್ರೀಮತಿ ಜಯಶ್ರೀ ಡಿ ಅತ್ತಾವರ್.  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಜಯಂತಿ ಆರ್ ಮೊಯಿಲಿ,   ಉಪ ಕಾರ್ಯಾಧ್ಯಕ್ಷೆಯರಾದ ಶ್ರೀಮತಿ ರಂಜನಿ ಆರ್ ಮೊಯಿಲಿ ಮತ್ತು ಶ್ರೀಮತಿ ಸುರೇಖಾ ಎಚ್ ದೇವಾಡಿಗ, ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ,  ಜತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್  ಉಪಸ್ತಿತರಿದ್ದು ದೀಪ ಬೆಳಗಿಸಿ ಶ್ರೀಮತಿ ಉಮಾ ಶೇರಿಗಾರ್ ಮತ್ತು  ಶ್ರೀಮತಿ ಅಮಿತ ರಾವ್ ಇವರ ಪ್ರಾರ್ಥನೆಯೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು.



ಶ್ರೀಮತಿ ಜಯಂತಿ ಆರ್ ಮೊಯಿಲಿ ಎಲ್ಲರನ್ನೂ ಸ್ವಾಗತಿಸಿ ಅರಸಿನ ಕುಂಕುಮ ಕಾರ್ಯಕ್ರಮ ಹಾಗೂ ಪ್ರಜಾಪ್ರಭುತ್ವ ದಿನದ ಶುಭಕೋರಿದರು. ಮಹಿಳಾ ವಿಭಾಗದ ವರ್ಷಾದ್ಯಂತ ನಡೆದ ಕಾರ್ಯಕ್ರಮಗಳನ್ನು ಹಾಗೂ  ಸಮಾಜದ ಹಿರಿಯ ಮಹಿಳೆಯ ಮನೆಗೆ ಭೇಟಿ ನೀಡಿ  ಅವರನ್ನು ಸತ್ಕರಿಸಿದ ಕಾರ್ಯಕ್ರಮಗಳನ್ನು ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ ವಿವರಿಸಿದರು. ಶ್ರೀಮತಿ ಸುರೇಖಾ ದೇವಾಡಿಗ ಮತ್ತು  ಶ್ರೀಮತಿ ರಂಜಿನಿ ಮೊಯಿಲಿ ಅತಿಥಿಗಳನ್ನು ಪರಿಚಯಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಡಾ . ಶ್ವೇತ ದೇವಾಡಿಗ ಇವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರವಿ ಯಸ್ ದೇವಾಡಿಗ ರನ್ನು ಮಹಿಳಾ ವಿಭಾಗದ ಪರವಾಗಿ ಸನ್ಮಾನಿಸಲಾಯಿತು.


 ಕಾರ್ಯಕ್ರಮದ ಅಂಗವಾಗಿ ಮಿಸೆಸ್ ದೇವಾಡಿಗ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 20 ಮಹಿಳೆಯರು ಭಾಗವಹಿಸಿ ಶ್ರೀಮತಿ ರಿಯಾ ಅತ್ತಾವರ್ ಮಿಸೆಸ್ ದೇವಾಡಿಗ ಕಿರೀಟ ವನ್ನು ತನ್ನದಾಗಿಸಿಕೊಂಡರೆ, ಶ್ರೀಮತಿ ಭಾಗ್ಯಶ್ರೀ ದೇವಾಡಿಗ ಮತ್ತು  ಶ್ರೀಮತಿ ವನಿತಾ ಕರ್ಮರನ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ವಿಜೇತರಾದರು.
ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಸರ್ವಮಹಿಳೆಯರು ಭಾಗವಹಿಸಿ ಪರಸ್ಪರ ಅಭಿನಂದಿಸಿ ಶುಭಕೋರಿದರು. ಕೊನೆಗೆ  ಶ್ರೀಮತಿ ಪ್ರಮೀಳಾ ಶೇರಿಗಾರ್  ಧನ್ಯವಾದವಿತ್ತು ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯವಾಯ್ತು




No comments:

Post a Comment

ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...