ದೇವಾಡಿಗ ಭವನ, ನೆರೂಲ್ ನಲ್ಲಿ ಶ್ರೀ ರಾಮ ಭಜನಾ ಮOಡಲಿ ದೇವಾಡಿಗ ಸಂಘ ಮುOಬೈ ಅವರಿOದ ಇಂದು ಶ್ರಾವಣ ಶನಿವಾರದ ಪ್ರಯುಕ್ತ ಮತ್ತು ಶ್ರೀ ರಾಘವೇಂದ್ರ ಸ್ವಾಮಿಯವರ ಪುಣ್ಯತಿಥಿಯ ಅಂಗವಾಗಿ ಭಜನಾ ಕಾರ್ಯಕ್ರಮ ನಡೆಯಿತು. ಪೂಜೆಯ ಪ್ರಾಯೋಜಕತ್ವವನ್ನು ನೆರೂಲ್ ನ ದೇವಾಡಿಗ ಸಂಘದ ಖಜಾಂಚಿ ಶ್ರೀ ದಯಾನಂದ್ ದೇವಾಡಿಗ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಪೂರ್ಣಿಮಾ ದೇವಾಡಿಗರು ವಹಿಸಿದ್ದರು. ದೇವಾಡಿಗರ ಅನೂಪ್ ಜಾಲೋಟ ಶ್ರೀ ಸುರೇಶ್ ದೇವಾಡಿಗ ನೇರುಲ್, ಶ್ರೀ ಶಂಕರ ಮೊಯಿಲಿ ಸಾಕಿನಾಕಾ,ಶ್ರೀ ಕದಮ್ ನೇರೂಲ್,ಶ್ರೀ ಯಶವಂತ್ ದೇವಾಡಿಗ ಸುರತ್ಕಲ್,ಶ್ರೀಮತಿ ರಂಜಿನಿ ಮೊಯಿಲಿ, ಶ್ರೀಮತಿ ಮಾಲತಿ ಮೊಯಿಲಿ ಶ್ರೀ ದಯಾನಂದ್ ದೇವಾಡಿಗ ನೇರುಲ್,ಶ್ರೀಮತಿ ಆಶಾ ದೇವಾಡಿಗ ಸನ್ಪಾಡ,ಶ್ರೀ ಚಂದ್ರಶೇಕರ ದೇವಾಡಿಗ ಮತ್ತು ಭಜನೆ ಬುವಾಜೀ ಶ್ರೀ ವಿಟ್ಟಲ ದೇವಾಡಿಗರು ಬOದಿದ್ದ ಭಕ್ತಾದಿಗಳನ್ನು ಭಕ್ತಿ ಸಾಗರದಲ್ಲಿ ತೇಲಿಸಿದರು.ಈ ಸಂಧರ್ಭದಲ್ಲಿ ಇತ್ತೀಚೆಗೆ ಮಲೇಶ್ಯದ ಮಾಸ್ಟರ್ ಅಥ್ಲೆಟಿಕ್ ಚಾOಪಿಯನ್ ಶಿಪ್ ನಲ್ಲಿ ಉದ್ದ ಜಿಗಿತ,ಎತ್ತರ ಜಿಗಿತ, ಮತ್ತು ಟ್ರಿಪಲ್ ಜಿಗಿತದಲ್ಲಿ ಚಿನ್ನ ಬೆಳ್ಳಿ ಪದಕ ವಿಜೇತೆ ಶ್ರೀಮತಿ ಜಯಂತಿ ಎಮ್ ದೇವಾಡಿಗರನ್ನು ಮತ್ತು ಸುರತ್ಕಲ್ ನ ಖ್ಯಾತ ಕ್ಲಾರೆನೆಟ್ ವಾದಕ ಮತ್ತು ಉತ್ತಮ ಭಜನೆ ಗಾಯಕ ಯಶವಂತ ದೇವಾಡಿಗ ಅವರನ್ನು ಸತ್ಕರಿಸಲಾಯಿತು.ಅಲ್ಲದೆ ಶ್ರೀ ಲೋಲಾಕ್ಶ ಅತ್ತಾವರ ಅವರು ದೇವಾಡಿಗ ಸಂಘದ ವೈದ್ಯಕೀಯ ನಿಧಿಗೆ ರುಪೈ 25,000/- ದೇಣಿಗೆ ನೀಡಿದರು. ಪ್ರಧಾನ ಅರ್ಚಕರಾಗಿ ಶ್ರೀ ಎಸ್ ಪಿ ಕರ್ಮರನ್ ಪೂಜಾವಿಧಿ ಪೂರೈಸಿದರೆ, ಶ್ರೀ ಪ್ರಭಾಕರ ದೇವಾಡಿಗ ಅಡ್ವೋಕೇಟ್ ಸOಪೂರ್ಣ ಕಾರ್ಯಕ್ರಮ ಆಯೋಜಿಸಿದ್ದರು.
-- : ಶ್ರೀ ಗಣೇಶ್ ಶೇರಿಗಾರ್
No comments:
Post a Comment