Wednesday, 16 August 2017

ನೆರೂಲ್ ದೇವಾಡಿಗ ಭವನದಲ್ಲಿ ದೇವಾಡಿಗ ಭಕ್ತಿ ಸಂಗಮ ಕಾರ್ಯಕ್ರಮ 

ಶ್ರೀ   ಸುರೇಶ್ ದೇವಾಡಿಗ ನೆರೂಲ್ ಇವರ ಸಾರಥ್ಯದಲ್ಲಿ    ದೇವಾಡಿಗ  ಭಕ್ತಿ ಸOಗಮ  ಕಾರ್ಯಕ್ರಮವನ್ನು ಸ್ವಾತಂತ್ರ್ಯ ದಿನಾಚರಣೆಯ ದಿನ ಆಗೋಸ್ಟ್ 15 ರಂದು ಮದ್ಯಾಹ್ನ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ಸಂಗೀತ ಸಾಧನವಾದ ಹಾರ್ಮೋನಿಯಂ ನ್ನು ಪೂಜಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು.ಇದರ ಜೊತೆಗೆ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗರು, ಮಾಜಿ ಅಧ್ಯಕ್ಷರುಗಳಾದ ಶ್ರೀ ಎಚ್ ಮೋಹನ ದಾಸ್ , ಶ್ರೀ ಎಸ್ ಪಿ ಕರ್ಮರನ್ ಮತ್ತು ನವಿ ಮುOಬೈ ಪ್ರಾದೇಶಿಕ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷರಾದ ಶ್ರೀ ಪಿ ವಿ ಎಸ್ ಮೊಯಿಲಿಯವರು ಭಕ್ತಿ ಸಂಗಮದ ಗಾಯಕರುಗಳನ್ನು ಮುOದಿನ ದಿನಗಳಲ್ಲಿ ಯಶಸ್ವಿಯಾಗಿ ಭಕ್ತಿಗೀತೆ ಕಾರ್ಯಕ್ರಮವನ್ನು ಮುOಬೈಯಾಧ್ಯಂತ ನೀಡುವಂತಾಗಲಿ ಎOದು ಹಾರೈಸಿದರು.ಶ್ರೀ ಸುರೇಶ್ ದೇವಾಡಿಗ ಮತ್ತು ಬಳಗದ ಸದಸ್ಯರುಗಳಾದ ಶ್ರೀ ಶಂಕರ ಮೊಯಿಲಿ ಸಾಕಿನಾಕಾ, ಶ್ರೀಮತಿ ಜಯಲಕ್ಶ್ಮಿ ಆರ್ ದೇವಾಡಿಗ ಅಸಲ್ಫ,ಶ್ರೀ ರಾಘವ ದೇವಾಡಿಗ ಭಾಂಡುಪ್, ಶ್ರೀಮತಿ ರಂಜಿನಿ ಮೊಯಿಲಿ ಪರೇಲ್,ಶ್ರೀ ಗಣೇಶ್  ಶೇರಿಗಾರ್ ವಾಶಿ ಇವರುಗಳು ನೆರೆದಿದ್ದ ಸುಮಾರು 600ಕ್ಕೂ ಹೆಚ್ಚು ದೇವಾಡಿಗ ಭಾಂಧವರನ್ನು ಭಕ್ತಿ ಕಡಲಲ್ಲಿ ತೇಲಿಸಿದರು.ಅಲ್ಲದೆ ಕೆಲವು ಭಕ್ತಾಭೀಮಾನಿಗಳು ಈ ಭಕ್ತಿ ಸಂಗಮದ ಹೆಸರನ್ನು " ಶ್ರೀ ಏಕನಾಥೇಶ್ವರಿ ಭಕ್ತಿ ಸಂಗೀತ ಬಳಗ ಎOದು ಹೆಸರಿಸಬೇಕೆOದು ಸಲಹೆ ನೀಡಿದರು.

No comments:

Post a Comment

ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...